M&HR
  • HOME
  • About Us
  • Our Services
  • Training Programmes
  • Collaborate with M&HR
    • Join HR Online Groups
  • MHR Learning Academy
  • Online Store
  • Niruta's Read & Write Initiative
    • Leaders Talk
  • HR Blog
    • Kannada Blog
  • Current Job Openings
  • Videos
  • Contact Us
  • HOME
  • About Us
  • Our Services
  • Training Programmes
  • Collaborate with M&HR
    • Join HR Online Groups
  • MHR Learning Academy
  • Online Store
  • Niruta's Read & Write Initiative
    • Leaders Talk
  • HR Blog
    • Kannada Blog
  • Current Job Openings
  • Videos
  • Contact Us
M&HR

ಕಾರ್ಮಿಕ ಕಾನೂನು ಕಲ್ಯಾಣ ಮತ್ತು ಶಿಕ್ಷಣ

5/18/2022

0 Comments

 
Picture
ಕಾಲ ಬದಲಾದಂತೆ ನಾವೆಲ್ಲರೂ ಬದಲಾಗಬೇಕು ಬದಲಾವಣೆ ನಿಶ್ಚಿತ ಅದರೊಂದಿಗೆ ನಾವು ಹೋದಾಗ ನಮ್ಮ ಅಭಿವೃದ್ಧಿ ಸಾಧ್ಯ, ಇಂದು ಎಲ್ಲ ಕ್ಷೇತ್ರಗಳಲ್ಲಿ ಅನೇಕಾನೇಕ ರೀತಿಯ ಬದಲಾವಣೆ ಅಭಿವೃದ್ಧಿ ಕಾಣುತ್ತಿದ್ದೇವೆ, ಆಧುನಿಕ ಸಲಕರಣೆ, ವಿಧಿ ವಿಧಾನಗಳಾದ, ಮಾಧ್ಯಮ, ಮಾಹಿತಿ ತಂತ್ರಜ್ಞಾನ, ಮಿಂಚಂಚೆ (E-mail) ಗಳಿದ್ದರೂ ಇದು ಕರ್ನಾಟಕದ ತಾಲ್ಲೂಕು, ಹಿಂದುಳಿದ ಹಾಗೂ ದುರ್ಗಮ ಪ್ರದೇಶಗಳ ಜನರಿಗೆ ಅನೇಕ ವಿಷಯಗಳು ತಲುಪಿಲ್ಲ. ಇಂದಿನ ಹೊಸ ಸರ್ಕಾರಗಳು Make in India, ಆಮ್ ಆದ್ಮಿ ಯೋಜನೆ, ಜನ್ ಧನಗಳಂತಹ ವಿಷಯಗಳು ಸಾಮಾನ್ಯರಲ್ಲಿ ಸಾಮಾನ್ಯನಿಗೆ ತಲ್ಪಿಸುವ ದಿಶೆಯಲ್ಲಿ ಪ್ರಯತ್ನ ನಡೆದುದು ಸ್ತುತ್ಯಾರ್ಹ.

ಆದರೂ ಕೈಗಾರಿಕಾ ಸಂಬಂಧಿ ನೌಕರರಿಗೆ, ಅಸಂಘಟಿತ ಕಾರ್ಮಿಕರಿಗೆ ನನಗೆ ತಿಳಿದಂತೆ ಅವರ ಹಕ್ಕು ಬಾಧ್ಯತೆಗಳು ತಿಳಿದಿಲ್ಲ. ಸರ್ಕಾರ ಹಾಗೂ ಕಾನೂನುಗಳು ಕೂಡ ಕೆಲವೊಂದು ಉಪಯುಕ್ತ ಹಾಗೂ ಕಲ್ಯಾಣಕರ ಕಾರ್ಯಕ್ರಮಗಳನ್ನು ನಿರೂಪಿಸಿದ್ದರೂ ಎಲ್ಲರಿಗೂ ಇನ್ನೂ ಮುಟ್ಟಿಲ್ಲ. ಇನ್ನೂ ಬಹಳ ವಿಷಯಗಳು ಆಂಗ್ಲ ಭಾಷೆಯಲ್ಲಿ ಉಳಿದಿವೆ, ಅಲ್ಲದೆ ಮಿಂಚಂಚೆ, Website, Online ವಿಷಯಗಳು ಕನ್ನಡದಲ್ಲಿ ಆಗಬೇಕಾಗಿದೆ. ಕೆಲವೊಂದೆಡೆ ಇವು ಇದ್ದರೂ ಕೂಡ ಆಗಿಲ್ಲ, ಉದ್ದಿಮೆಗಳಿಗೆ ಮಾಲೀಕರಿಗೆ, ನಿಯೋಜಕರಿಗೆ, ಆಡಳಿತದ ವ್ಯಕ್ತಿಪರರಿಗೆ ಅವರಿಗೆ ಅನ್ವಯದ ರೀತಿಗೆ ಸಹಾಯವಾಗಿ ಕೆಲವೊಂದು ಹಾಗೂ ಅನೇಕ ಸಾಹಿತ್ಯ ಇಂಗ್ಲೀಷ್‍ನಲ್ಲಿ ಇರುವುದಕ್ಕೆ ಕೊರತೆಯಿಲ್ಲ. ಇವರಿಗೆ ಭಾಷೆಯ ಸಮಸ್ಯೆ ಇರದು.
ಅದರೆ ಉದ್ದಿಮೆಗಳಲ್ಲಿಯ ನೌಕರರಿಗೆ, ಸಂಘಗಳ ಸದಸ್ಯರಿಗೆ, ಗುತ್ತಿಗೆ ನೌಕರರಿಗೆ, ಮಹಿಳೆಯರಿಗೆ, ಅನಕ್ಷರಸ್ಥರಿಗೆ, ಕೃಷಿ ಹಾಗೂ ಅಸಂಘಟಿತ ವಲಯದ ನೌಕರರಿಗೆ / ಕಾರ್ಮಿಕರಿಗ ತಲ್ಪುವಂತಹವರಿಗೆ ಸರಳ ರೀತಿಯಲ್ಲಿ ಅರ್ಥವಾಗುವ ತರಹ, ತಿಳಿಯುವ ತರಹ ಹಾಗೂ ಅವರ ತಪ್ಪುಗ್ರಹಿಕೆ, ಅಥವಾ ಅರೆಬರೆ ತಿಳುವಳಿಕೆ ಅಥವಾ ಅದರ ಬಗೆಗಿನ ಅಜ್ಞಾನ ನಿವಾರಿಸುವಲ್ಲಿ ಕಾರ್ಮಿಕ ಕಾಯಿದೆ, ಕಲ್ಯಾಣಗಳಲ್ಲಿ ಒಂದೇ ಸೂರಿನಲ್ಲಿ ಎಲ್ಲ ವಿಷಯಗಳ ಬಗೆಗಿನ ಮಾಹಿತಿ ಒಳಗೊಂಡ ಪುಸ್ತಕ, ಸಾಹಿತ್ಯ ನಾನು ಕಂಡಿಲ್ಲ. ಕೆಲವೊಂದೆಡೆ ಇದ್ದರೂ ಕೂಡ ಆಯಾಯ ಇಲಾಖೆಗೆ ನಿರ್ದಿಷ್ಟವಾಗಿ ಸಂಬಂಧಿಸಿದಂತೆ ಕಾಣಬಹುದು, ಸಮಗ್ರವಾಗಿ ಒಂದೇ ಪುಸ್ತಕದಲ್ಲಿ ಬಂದಿಲ್ಲ.

ಈ ದಿಶೆಯಲ್ಲಿ ನನಗೆ ಅನೇಕ ಸಂಘ ಸಂಸ್ಥೆಗಳ, ಸಂಘದ ಪದಾಧಿಕಾರಿಗಳು, ಕಾರ್ಮಿಕರಿಗೆ ಸೂಕ್ತ ಹಾಗೂ ಉಪಯೋಗವಾಗುವ, ಅವರಿಗೆ ತಲುಪುವ ರೀತಿಯಲ್ಲಿ ಸಾಹಿತ್ಯ ತರಲು ಅನೇಕ ಸಾರಿ ನನಗೆ ಒತ್ತಾಯಿಸುತ್ತಲೇ ಬಂದಿದ್ದಾರೆ. ನಾನು ಇಲ್ಲಿಯವರೆಗೆ ಆರು ಗ್ರಂಥಗಳನ್ನು ಮಾನವ ಸಂಪನ್ಮೂಲ, ಕಾರ್ಮಿಕ ಕಾಯಿದೆಗಳ ಬಗೆಗೆ ವೃತ್ತಿಪರರಿಗೆ, ಉದ್ದಿಮೆಗಳಿಗೆ ಸಹಾಯವಾಗುವಂತೆ ಹೊರತಂದಿದ್ದರೂ ಈ ದಿಶೆಯಲ್ಲಿ ಎಂದರೆ ಕೆಳಸ್ತರದ, ಕಾರ್ಮಿಕ ವರ್ಗ ಉಪಯುಕ್ತ ಕೈಪಿಡಿ, ತರಲು ಪ್ರಚೋದನೆಯಾಯಿತು.

ನಾನು ಈ ಪುಸ್ತಕದಲ್ಲಿ ಕೇವಲ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು, ಅವರ ದೃಷ್ಟಿಕೋನದಲ್ಲಿ ತಿಳಿದುಕೊಂಡು, ಉಪಯೋಗ ಹೊಂದಲು ಪ್ರಯತ್ನಿಸಿದ್ದೇನೆ, ಇದರಲ್ಲಿ ಕಾನೂನು ರೀತಿ ನೋಡದೆ, ಕಲ್ಯಾಣ ದೃಷ್ಟಿಯಲ್ಲಿ ಹಾಗೂ ಅದರಡಿಯ spirits - ಭಾವನೆಗಳ ಭಾವನೆಯಲ್ಲಿ ನೋಡುವ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಅದರಂತೆ ಪುಸ್ತಕದಲ್ಲಿ ಮೊದಲ ಭಾಗವಾಗಿ ಕಾನೂನು, ಎರಡನೆಯ ಭಾಗವಾಗಿ ಕಾರ್ಮಿಕ ಕಲ್ಯಾಣ ಹಾಗೂ ಮೂರನೆಯ ಭಾಗವಾಗಿ ಕಾರ್ಮಿಕ ಶಿಕ್ಷಣದ ಬಗ್ಗೆ ವಿಷಯ ಮಂಡಿಸಿದ್ದೇನೆ. ಕಾನೂನು ಭಾಗದಲ್ಲಿ ಎಲ್ಲ ಕಾರ್ಮಿಕ ಕಾಯಿದೆಗಳ ಸಾರ, ಅನುಕೂಲಗಳು, ಕಲ್ಯಾಣ ಭಾಗದಲ್ಲಿ ಇಂದು ದೊರೆಯುವ ಸವಲತ್ತುಗಳು, ಅನುಕೂಲಗಳನ್ನು ಕ್ರೋಢೀಕರಿಸಿದ್ದರೆ, ಶಿಕ್ಷಣ ಭಾಗದಲ್ಲಿ ಅನೇಕ ಉಪಯುಕ್ತ ನನ್ನ ಲೇಖನಗಳನ್ನು ವಿಶದಪಡಿಸಿದ್ದೇನೆ, ಇದರಲ್ಲಿಯ ಹೆಚ್ಚಿನ ಬರವಣಿಗೆಗಳು ಆಕಾಶವಾಣಿ ಬೆಂಗಳೂರು ನಡೆಸುವ ಕಾರ್ಮಿಕರಿಗಾಗಿ ಕಾರ್ಯಕ್ರಮದಲ್ಲಿ ಕಳೆದ ಒಂದು ದಶಕದಿಂದ ಪ್ರಸಾರವಾಗಿವೆ.

ಈ ಲೇಖನಗಳಲ್ಲಿ ನಾನು ನನ್ನ ತಿಳುವಳಿಕೆ, ಅನುಭವ ಆಧರಿಸಿ, ಯಶಸ್ಸಿಗೆ ಅವಶ್ಯವಾದ ಯೋಚನೆ ಹಾಗೂ ಮಾರ್ಗದರ್ಶನಗಳನ್ನು, ಮೌಲ್ಯಯುತವಾಗಿ ಬಿಂಬಿಸುವ ಸಾಹಸ ಮಾಡಿದ್ದೇನೆ, ಇವುಗಳನ್ನು ಓದುವ ಮೂಲಕ ಸಮಗ್ರ ತಿಳುವಳಿಕೆ, ಜ್ಞಾನ, ಅರಿವು ಮತ್ತು ವಿಷಯದ ಗ್ರಹಿಕೆಯ ಮೂಲಕ ಮೌಲ್ಯಯುತ ಸಾಧನೆಗೆ ದಾರಿ ಆಗಬಹುದು ಎಂದು ನನ್ನ ಅನಿಸಿಕೆ.

ಈ ರೀತಿ ಉದ್ದಿಮೆಗಳಿಗೆ, ಕೈಗಾರಿಕೆಗಳಿಗೆ ಅಸಂಘಟಿತ ವಲಯದ ಉದ್ಯೋಗಿಗಳಿಗೆ, ಕಾನೂನು, ಸಮಾಜಕಾರ್ಯ, ಆಡಳಿತದ ವಿದ್ಯಾರ್ಥಿಗಳಿಗೆ, ಕಾರ್ಮಿಕ ಸಂಘಗಳಿಗೆ ಅದರ ಬಗ್ಗೆ ಆಸಕ್ತಿ ಹೊಂದಿದವರಿಗೆ All-in-one (ಒಂದರಲ್ಲಿಯೇ ಎಲ್ಲ) ಲಭ್ಯವಾಗಿಸುವುದೇ ನನ್ನ ಈ ಅಲ್ಪ ಪ್ರಯತ್ನ ಈ ರೀತಿಯಾಗಿ ಹೊರತರಲು ನನಗೆ ಅನೇಕಾನೇಕರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಾಯ, ಮಾರ್ಗದರ್ಶನ, ಸಲಹೆ ನೀಡಿದ್ದಾರೆ. ನನ್ನ ಸಹಾಯಕ ಶ್ರೀ ಚೇತನ್ ಹೆಚ್.ಎಸ್. ಈ ಕೃತಿಯನ್ನು ಕಂಪ್ಯೂಟರಿಗೊಳಿಸಲು ಸತತವಾಗಿ ಸಾಕಷ್ಟು ದುಡಿದಿದ್ದಾರೆ, ಅವರ ನೆರವು ನಾನು ಮರೆಯುವಂತಿಲ್ಲ. ಅದೇ ರೀತಿ ಕೃತಿಗೆ ಮೆರುಗು ನೀಡಿದ ಶ್ರೀಯುತ ಮುರಳೀಧರ, ವಕೀಲರು AITUC ಇವರ ಮಾರ್ಗದರ್ಶನ, ಪ್ರೋತ್ಸಾಹ ಅಪರಿಮಿತ, ಅವರಿಂದ ನನ್ನ ಉತ್ಸಾಹ ಇಮ್ಮಡಿಸಿದೆ. ಅದೇ ರೀತಿ ಕೃತಿಗೆ ತಮ್ಮ ಸಲಹೆ, ಸೂಚನೆ, ಕೆಲವೊಂದು ತಿದ್ದುಪಡಿ ಸೂಚಿಸಿದ ನನ್ನ ಮಿತ್ರರು ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರು ಶ್ರೀಯುತ ವೆಂಕಟೇಶ್ ಮತ್ತು ಶ್ರೀಯುತ ವೀರನಗೌಡ ಇವರಿಬ್ಬರ ಸಹಾಯಕ್ಕೆ ನಾನು ಅಭಾರಿ. ಅದೇ ರೀತಿ ಈ ಕೃತಿ ತರಲು ಸಕಲ ರೀತಿಯ ಉತ್ತೇಜನ, ಸಹಾಯ ನೀಡಿದ ನನ್ನ ಶ್ರೀಮತಿ ಪದ್ಮಾ ರವರಿಗೂ ಧನ್ಯವಾದ ಹಾಗೂ ಈ ಕೃತಿಯನ್ನು ಅತ್ಯಲ್ಪ ವೇಳೆಯಲ್ಲಿ ಮುದ್ರಿಸಿದ ಪ್ರಕಾಶಕರ ಸಹಾಯ ಅಮೂಲ್ಯ. ಕೃತಿಗೆ ಮುನ್ನುಡಿ ಬರೆದ ಡಾ. ವಿಶ್ವನಾಥ್, IAS ಕಾರ್ಮಿಕ ಆಯುಕ್ತರು (ಕರ್ನಾಟಕ ಸರಕಾರ) ಇವರಿಗೂ ನಾನು ಚಿರಋಣಿ.
​
ಸಹೃದಯ, ಓದುಗರು ಹಾಗೂ ದೇಶದ ಅದರಲ್ಲೂ ಕರ್ನಾಟಕ ಸಮಸ್ತ ಕಾರ್ಮಿಕ ಶ್ರಮಿಕರಿಗೆ ಇದನ್ನು ಅರ್ಪಿಸುವ ಮೂಲಕ ಅವರ ಸಲಹೆ, ಸೂಚನೆ, ಟೀಕೆಗಳಿಗೆ ನಾನು ಮುಕ್ತನಾಗಿದ್ದೇನೆ. ಈ ಕೃತಿ ಅವರಿಗೆ ತಲುಪಿ ಸಹಾಯವಾದಲ್ಲಿ ನನ್ನ ಪರಿಶ್ರಮ, ಜ್ಞಾನ ಸಾರ್ಧಕ. ಇದು ಸಂಬಂಧಿಸಿದವರ ಕೈ ತಲುಪಿದಾಗ ಅದನ್ನು ಅವರು ಇತರರಿಗೂ, ತಮ್ಮ ಮಿತ್ರ ಉದ್ಯೋಗಿಗಳಿಗೂ, ಸಂಘಗಳಿಗೆ ತಲುಪಿಸಿ ಎಂದು ನನ್ನ ಕೋರಿಕೆ.
 
ರಾಮ್ ಕೆ. ನವರತ್ನ
ಪರಿವಿಡಿ
ಭಾಗ 1 - ಕಾರ್ಮಿಕ ಕಾನೂನು
  1. ಕಾರ್ಖಾನೆಗಳ ಕಾಯ್ದೆ 1948 ಮತ್ತು ಕರ್ನಾಟಕ ಕಾರ್ಖಾನೆಗಳ ನಿಯಮಗಳು - 1969
  2. ಕರ್ನಾಟಕ ಅಂಗಡಿ ಮತ್ತು ಮುಗ್ಗಟ್ಟುಗಳ ಕಾಯ್ದೆ - 1961
  3. ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ರದ್ದತಿ) ಕಾಯ್ದೆ - 1970
  4. ತೋಟಗಾರಿಕ ಕಾರ್ಮಿಕ ಕಾನೂನು ಕಾಯ್ದೆ - 1951
  5. ಮೋಟರ್ ಸಾರಿಗೆ ಕಾರ್ಮಿಕರ ಕಾಯ್ದೆ - 1961
  6. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗದ ಶ್ರಮೀಕರಣ ಮತ್ತು ಷರತ್ತುಗಳ ಕಾಯ್ದೆ - 1996
  7. ವೇತನ ಸಂದಾಯ ಕಾಯ್ದೆ, 1936 ಮತ್ತು ಕರ್ನಾಟಕ ವೇತನ ಸಂದಾಯ ನಿಯಮಗಳು, 1963
  8. ಕನಿಷ್ಠ ವೇತನ ಕಾಯ್ದೆ =- 1948
  9. ಸಮಾನ ವೇತನ ಕಾಯ್ದೆ - 1976
  10. ಬೋನಸ್ ಸಂದಾಯ ಕಾಯ್ದೆ - 1965
  11. ಉಪದನ (ಗ್ರಾಚ್ಯುಟಿ) ಕಾಯ್ದೆ - 1972
  12. ನೌಕರರ ಭವಿಷ್ಯ ನಿಧಿ ಮತ್ತು ಪಿಂಚಣಿ ಯೋಜನೆ - 1952
  13. ಕಾರ್ಮಿಕರ ರಾಜ್ಯ ವಿಮೆ ಯೋಜನೆ - 1948
  14. ಪ್ರಸೂತಿ ಸೌಲಭ್ಯ ಕಾಯ್ದೆ 1961 ಮತ್ತು ಕರ್ನಾಟಕ ಪ್ರಸೂತಿ ಸೌಲಭ್ಯ ನಿಯಮಗಳು - 1966
  15. ನೌಕರರ ನಷ್ಟ ಪರಿಹಾರ ಕಾಯ್ದೆ - 1923
  16. ಕಾರ್ಮಿಕ ಸಂಘಗಳ ಕಾಯಿದೆ - 1926
  17. ಕೈಗಾರಿಕಾ ವಿವಾದ ಕಾಯ್ದೆ - 1947
  18. ಕೈಗಾರಿಕಾ ಉದ್ಯೋಗಗಳ (ಸ್ಥಾಯಿ ಆಜ್ಞೆ) ಕಾನೂನು - 1947
  19. ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜಾ ದಿನ) ಕಾಯ್ದೆ - 1963
  20. ಕಾರ್ಯ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಿವಾರಣೆ - 2013
  21. ಕುಂದುಕೊರತೆ ನಿವಾರಣಾ ಸಮಿತಿ
  22. ಸಾಮಾಜಿಕ ನ್ಯಾಯ​

ಭಾಗ 2 - ಕಾರ್ಮಿಕ ಕಲ್ಯಾಣ
  1. ಕಾರ್ಮಿಕರ ಸೇವೆಯಲ್ಲಿ ಕಲ್ಯಾಣ ಮಂಡಳಿಯ ಯೋಜನೆಗಳು
  2. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರೆಯುವ ಅನುಕೂಲತೆಗಳು
  3. ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ - ಉಚಿತ ಚಿಕಿತ್ಸೆ
  4. ಎನ್ಪಿಎಸ್ ಲೈಟ್ ಯೋಜನೆ
  5. ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ
  6. ಅಟಲ್ ಪೆಂಕ್ಷನ್ ಯೋಜನಾ
  7. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮ ಯೋಜನ ಮತ್ತು ಸುರಕ್ಷ ಬೀಮ ಯೋಜನ
 
ಭಾಗ 3 - ಕಾರ್ಮಿಕ ಶಿಕ್ಷಣ
  1. ಕಾಲ ನಿಷ್ಠೆ
  2. ಕ್ರೋಢೀಕೃತ ಕಾರ್ಯಸಂಸ್ಕೃತಿ ಹಾಗೂ ಕಾರ್ಯನೀತಿಯ ಸಂವಹನೆ
  3. ಕಾರ್ಮಿಕರ ಕಲ್ಯಾಣ ಹಾಗೂ ಸಾಮಾಜಿಕ ಭದ್ರತೆ
  4. ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರ ಕಲ್ಯಾಣ
  5. ಬದಲಾವಣೆ - ನನ್ನ ಪಾತ್ರ
  6. ಕೈಗಾರಿಕಾ ಸಂಬಂಧಗಳಲ್ಲಿ ಸಂವಹನೆಯ ಮಹತ್ವ
  7. ಪಾಳಿ ಕೆಲಸದ ನೌಕರರ ಸುರಕ್ಷತೆ ಹಾಗೂ ಮಾಲೀಕರ ಜವಾಬ್ದಾರಿ
  8. ಕೈಗಾರಿಕೆಗಳಲ್ಲಿ ಮಾನವ ಸಂಬಂಧಗಳು
  9. ಉದ್ದಿಮೆಗಳಲ್ಲಿ ಕನ್ನಡ
  10. ಕಾರ್ಯಕ್ಷೇತ್ರದಲ್ಲಿ ಸಂವಹನ ನೀತಿ ಮತ್ತು ಸಂಸ್ಕೃತಿ ನಿರ್ಮಾಣ
  11.  ESI A NEED INDEED
  12. ವೆಚ್ಚ ಪ್ರಜ್ಞೆ ಮತ್ತು ವೆಚ್ಚ ಕಡಿತ
  13. ಸಮರ್ಪಣಾ ಮನೋಭಾವನೆ
  14. ಉತ್ಪಾದಕತೆಯಲ್ಲಿ ನೌಕರರ ಪಾತ್ರ
  15. ಘರ್ಷಣೆಯ ನಿರ್ವಹಣೆ
  16. ಬದಲಾವಣೆ ಪ್ರಗತಿಯ ಮೂಲ
  17. ಗ್ರಂಥಋಣಿ - BIBLIOGRAPHY
0 Comments



Leave a Reply.

    Archives

    March 2023
    May 2022

    Categories

    All
    General
    HR Books


    Picture

    MHR LEARNING ACADEMY

    Get it on Google Play store
    Download App
    Online Courses

    Picture
    WhatsApp Group

    Picture
    More Details


    RSS Feed


site map


Site

  • HOME
  • ABOUT US
  • MHR LEARNING ACADEMY
  • COLLABORATE WITH M&HR
  • HR BLOG
  • VIDEOS​​​

Training 

  • TRAINING PROGRAMMES
  • CERTIFICATE TRAINING COURSES

​​NGO & CSR

  • ​CSR

PUBLICATIONS

  • LEADER'S TALK
  • NIRUTA'S READ & WRITE INITIATIVE
  • ​TRANSLATING & TYPING

Our Other Websites:

  • WWW.NIRUTAPUBLICATIONS.ORG
  • WWW.NIRATANKA.ORG
  • WWW.HRKANCON.COM

Job

  • CURRENT JOB OPENINGS​
  • ​FIND FREELANCE JOBS

POSH

  • POSH
  • POSH BLOG
  • OUR CLIENTS
  • OUR ASSOCIATES
  • WANT TO BECOME AN EXTERNAL MEMBER FOR AN IC?

subscribe 



JOIN OUR ONLINE GROUPS​


JOIN WHATSAPP BROADCAST


ONLINE STORE



Copyright : MHRSPL-2021, website designed and developed by : www.nirutapublications.org.